ಅಪಮೃತ್ಯು ಪರಿಹರಿಸೋ ಅನಿಲದೇವ (ಶ್ರೀ ಜಗನ್ನಾಥ ದಾಸರು)

ರಾಗ – ಕಾಂಬೋದಿ              ತಾಳ – ಝಂಪೆ

ಮುಖ್ಯಪ್ರಾಣ ದೇವರು ಉಡುಪಿಅಪಮೃತ್ಯು ಪರಿಹರಿಸೋ ಅನಿಲದೇವ
ಕೃಪಣವತ್ಸಲನೆ ಕಾವರ ಕಾಣೆ ನಿನ್ನುಳಿದು || ಪ ||

ನಿನಗಿನ್ನು ಸಮರಾದ ಅನಿಮಿತ್ತ ಬಂಧುಗಳು
ಎನಗಿಲ್ಲ ಆವಾವ ಜನುಮದಲ್ಲಿ
ಅನುದಿನದಲೆನ್ನುದಾಸೀನ ಮಾಡುವುದು
ನಿನಗೆ ಅನುಚಿತೋಚಿತವೆ ಸಜ್ಜನಶಿಖಾಮಣಿಯೆ || ೧ ||

ಕರಣಾಭಿಮಾನಿಗಳು ಕಿಂಕರರು ಮೂರ್ಲೋಕದರಸು
ಹರಿಯು ನಿನ್ನೊಳಗಿಪ್ಪ ಸರ್ವಕಾಲ
ಪರಿಸರನೆ ಈ ಭಾಗ್ಯ ದೊರೆತನಕೆ ಸರಿಯುಂಟೆ
ಗುರುವರ್ಯ ನೀ ದಯಾಕರನೆಂದು ಪ್ರಾರ್ಥಿಸುವೆ || ೨ ||

ಭವರೋಗ ಮೋಚಕನೆ ಪವಮಾನರಾಯ ನಿ
ನ್ನವರವನು ನಾನು ಮಾಧವಪ್ರಿಯನೆ
ಜವನ ಬಾಧೆಯ ಬಿಡಿಸೋ ಅವನಿಯೊಳು ಸುಜನರಿಗೆ
ದಿವಿಜಗಣ ಮಧ್ಯದಲಿ ಪ್ರವರ ನೀನಹುದೊ || ೩ ||

ಜ್ಞಾನವಾಯುರೂಪಕನೆ ನೀನಹುದೊ ವಾಣಿ ಪಂಚಾ
ನನಾದ್ಯಮರರಿಗೆ ಪ್ರಾಣದೇವ
ದೀನವತ್ಸಲನೆಂದು ನಾ ನಿನ್ನ ಮರೆಹೊಕ್ಕೆ
ದಾನವಾರಣ್ಯಕೃಶಾನು ಸರ್ವದಾ ಎನ್ನ || ೪ ||

ಸಾಧನ ಶರೀರವಿದು ನೀ ದಯದಿಕೊಟ್ಟದ್ದು
ಸಾಧಾರಣವಲ್ಲ ಸಾಧುಪ್ರಿಯ
ವೇದವಾದೋದಿತ ಜಗನ್ನಾಥವಿಠಲ
ಪಾದಭಕುತಿಯ ಕೊಟ್ಟು ಮೋದವನು ಕೊಡು ಸತತ || ೫ ||

You cannot copy content of this page